ಒಂದು ಮನೋವೈಜ್ಞಾನಿಕ ವಿಶ್ಲೇಷಣೆ : ಹಿಂಸಾತ್ಮಕ ಕ್ರಿಯೆಗೆ ಸಿರೋಟೋನಿನ್ ಅಭಾವವೇ ಕಾರಣ

ಒಂದು ಮನೋವೈಜ್ಞಾನಿಕ ವಿಶ್ಲೇಷಣೆ : ಹಿಂಸಾತ್ಮಕ ಕ್ರಿಯೆಗೆ ಸಿರೋಟೋನಿನ್ ಅಭಾವವೇ ಕಾರಣ

ಜಗತ್ತಿನಲ್ಲಿ ದಿನನಿತ್ಯ ಹಿಂಸಾತ್ಮಕ ಕ್ರಿಯೆಗಳು ನಡೆಯುತ್ತಲೇ ಇರುತ್ತವೆ. ಒಬ್ಬ ವ್ಯಕ್ತಿ ನಿರ್ಧಯಿಯಾಗಿ ಅನೇಕ ವ್ಯಕ್ತಿಗಳನ್ನು ಕೊಲೆಗೈದು, ಅತ್ಯಾಚಾರವೆಸಗಿ, ರಕ್ತ ಪಿಪಾಸಿಯಾಗಿ ನಿರಂತರವಾಗಿ ನಡೆದುಕೊಳ್ಳುತ್ತಲೇ ಇರುತ್ತಾನೆ. ಇವನಲ್ಲಿ ಕರುಣೆ, ವಾತ್ಸಲ್ಯ, ಮಾನವತಾವಾದಗಳೆಲ್ಲ ಬತ್ತಿ ಕೇವಲ ಕ್ರೌರ್ಯ, ಹಿಂಸೆ, ನಿಷ್ಕರುಣೆಗಳು ಮಡುಗಟ್ಟಿರುತ್ತವೆ. ಏಕೆ ಹೀಗೆ ಈ ವ್ಯಕ್ತಿಗಳು ಮೆದುಳಿನ ಸಂದೇಶಗಳಲ್ಲಿ ಏನಾದರೂ ತಪ್ಪಾಗಿ ಹೀಗೆ ವರ್ತಿಸುತ್ತಿರಬಹುದೇ? ಎಂದು ಸಂಶೋಧನೆಗಳು ನಡೆದವು.

ಹಿಂಸಾತ್ಮಕ ಅಪರಾಧಗಳನ್ನು ಮಾಡುವವರ ಮೆದುಳಿನಲ್ಲಿ ಕೆಲವೊಂದು ಅಪಾಯಕಾರಿ ಲೋಹಗಳಿರುವುದನ್ನು ಇಬ್ಬರು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಲೋಹಮಾಲಿನ್ಯವುಳ್ಳ ರಾಷ್ಟ್ರಗಳಲ್ಲಿ ಹೆಚ್ಚಿನ ಪ್ರಮಾಣದ ಹಿಂಸಾಚಾರಗಳು ನಡೆದಿರುವ ನಿದರ್ಶನಗಳಿವೆ. ಕ್ಯಾಲಿಪೋರ್ನಿಯಾದಲ್ಲಿ ಜೇಮ್ಸ್ ಆಲಿವರ್ ಹಬರ್ಟ್ ಎಂಬಾತ ೧೯೮೪ ರಲ್ಲಿ ೨೧ ಜನರ ಸಮೂಹವನ್ನು ಕೊಲೆಮಾಡಿದ. ಆತನ ಕೂದಲಿನ ರಾಸಾಯನಿಕ ರಚನೆಯನ್ನು ಪರೀಕ್ಷಿಸಿದಾಗ ಅದರಲ್ಲಿ ಹೆಚ್ಚಿನ ಪ್ರಮಾಣದ ‘ಕ್ಯಾಡ್ಮಿಯಂ’ ಇದ್ದದ್ದು ಕಂಡು ಬಂದಿತು. ಕ್ಯಾಡ್ಮಿಯಂ ಲೋಹವು ಮೂತ್ರ ಜನಕಾಂಗವನ್ನು ನಾಶಮಾಡುತ್ತದೆ. ಹಬರ್ಟಿಯ ಮೂತ್ರ ಜನಕಾಂಗವನ್ನು ಪರೀಕ್ಷಿಸಿದಾಗ ಅದು ಮೊದಲೇ ಸಾಕಷ್ಟು ನಾಶವಾಗಿದ್ದುದು ಕಂಡು ಬಂದಿತು. ಇಲನೋಯಿಸ್‌ನ ಪಿಫೀಫರ್ ಚಿಕಿತ್ಸಾ ಕೇಂದ್ರ ಅಧ್ಯಕ್ಷರಾದ ವಿಲಿಯಂ.ಜೆ. ವಾಲ್ಫ್ ಅವರು ಇಂಥಹ ಅನೇಕ ನಿದರ್ಶನಗಳನ್ನು ಕಂಡಿದ್ದಾರೆ. ಶರೀರವು ಕೆಲವೊಂದು ಅಪಾಯಕಾರಿ ಲೋಹಗಳನ್ನು ನಿಭಾಯಿಸಲು ಸಾಧ್ಯವಾಗದೇ ಇದ್ದಾಗ ಮನುಷ್ಯನಿಗೆ ಸರಿ, ತಪ್ಪುಗಳ ಪರಿಕಲ್ಪನೆ ಇಲ್ಲದಂತಾಗುತ್ತದೆ ಎಂದು ಅವರು ಹೇಳುತ್ತಾರೆ. ೧೯೮೯ ರಲ್ಲಿ ಪಿಫೀಫರ್‌ನಲ್ಲಿ ಅನೇಕ ಹಿಂಸಾಚಾರಿ ಮಕ್ಕಳನ್ನು ಗಮನಿಸಲಾಯಿತು. ಇವರೆಲ್ಲ ತಮ್ಮ ೨ ವರ್ಷದ ವಯಸ್ಸಿನಿಂದಲೇ ಬೆಕ್ಕುಗಳಿಗೆ ಅತೀವ ಹಿಂಸೆ ಕೊಡುತ್ತಿದ್ದುದನ್ನು ಗಮನಿಸಿ ಅವರಿಗೆ ಕೊಡುತ್ತಿದ್ದ ಆಹಾರವನ್ನು ನಿಯಂತ್ರಿಸಿ ಅವರ ವರ್ತನೆಗಳನ್ನು ಹಿಡಿತಗೊಳಿಸಲಾಯಿತು.

ಡಾರ್ಟ್‌ಮೌಲ್ ಕಾಲೇಜಿನ ಪ್ರಾಧ್ಯಾಪಕರಾದ ರೆವೀಗರ್ ಡಿ- ಮಾಸ್ಟರ್‍ಸ್ ಎಂಬುವವರು ಇದೇ ರೀತಿಯಾದ ಸಂಶೋಧನೆಗಳನ್ನು ಮಾಡಿ ದೃಡೀಕರಿಸಿದ್ದಾರೆ. ಸೀಸ ಮತ್ತು ಮ್ಯಾಂಗನೀಸ್‌ಗಳು ಸಹ ಮೆದುಳಿನ ರಾಸಾಯನಿಕ ರಚನೆಯಲ್ಲಿ ಬದಲಾವಣೆಗಳನ್ನು ಮಾಡಿ ಕಲಿಕೆಯ ಸಮಸ್ಯೆಗಳು, ವರಟು ವರ್ತನೆ, ಹಿಂಸೆ ಇತ್ಯಾದಿಗಳಿಗೆ ಕಾರಣವಾಗುವವು ಎಂದು ಕಂಡು ಹಿಡಿಯಲಾಯಿತು. ಕೆಲವೊಂದು ಗ್ರಾಮೀಣ ಬಾಲಕರಲ್ಲಿ ಬುದ್ಧಮಾಂದ್ಯತೆಗೂ ಇದು ಕಾರಣವಾಗಿದೆ, ಎಂದು ತಿಳಿದು ಬರುತ್ತದೆ. ಮ್ಯಾಂಗನೀಜ್‌ನಿಂದ ಮಾನಸಿಕ ಪ್ರತಿಕ್ರಿಯೆಗಳ ನಿಯಂತ್ರಣವು ಕ್ಷೀಣಿಸಿ ಹಿಂಸಾತ್ಮಕ ವರ್ತನೆ ತೋರುವುದೆಂದು ತಿಳಿದು ಬಂದಿದೆ. ಸೀಸ ಮತ್ತು ಮ್ಯಾಂಗನೀಸ್‌ಗಳು ಎಲ್ಲ ಕಡೆ ಹರಡುತ್ತಲಿವೆ. ನರವಿಜ್ಞಾನಿಗಳ ಪ್ರಕಾರ ಮ್ಯಾಂಗನೀಸ್ ವಸ್ತುವು ಮೆದುಳಿನಲ್ಲಿರುವ ‘ಸಿರೋಟೋನಿನ್’ ಎಂಬ ಪದಾರ್ಥದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದೊಂದು ನರಪ್ರಸರಣ ದ್ರವ (Neurotransmitter) ಮೆದುಳಿನ ಸಂದೇಶಗಳು ಪ್ರಸಾರವಾಗಲು ಈ ದ್ರವವೇ ಕಾರಣವಾಗುತ್ತದೆ. ಮಾಸ್ಟರ್ಸ್ ಅವರ ಪ್ರಕಾರ ಎಲ್ಲ ಹಿಂಸಾತ್ಮಕ (ಒರಟುತನ, ಅಪತ್ಕಾರಿತನ) ಮತ್ತು ಇತರ ಮನೋವೈಜ್ಞಾನಿಕ ತೊಂದರೆಗಳಿಗೆ ಸಿರೋಟೋನಿನ್‌ನ ಕೊರತೆಯೇ ಕಾರಣವಾಗಿದೆ. ಸರಿಯಾದ ವಿಟಾಮಿನ್‌ಗಳ ಪೂರೈಕೆಗಳಿಂದ ಈ ವೈಪರೀತ್ಯವನ್ನು ಸರಿಪಡಿಸಿಬಹುದೆಂದು ಅವರು ಹೇಳುತ್ತಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪೂಜ್ಯ ತಟ್ಟೆಯೊಳಿದೇನು ಶಬ್ದ?
Next post ಅಪರಾಧಿಗಲ್ಲವೇ ಶಿಕ್ಷೆ?

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

cheap jordans|wholesale air max|wholesale jordans|wholesale jewelry|wholesale jerseys